ಸೃಜನ

ಮೇಲೆ ಚಂದ್ರಾಮ
ಇಲ್ಲಿ ಚಿಗುರೆಲೆ ಬಳ್ಳಿ
ಅದರಲ್ಲಿ ಬಿಟ್ಟ ಅಮೃತಕಲಶ
ಮೇಲೊಂದು ಜೇನತೊಟ್ಟು
ಈ ತಂಬೂರಿ ಕುಂಬಳಕಾಯಿ
ಅದರಲ್ಲಿ ಹೃದಯ ಮೀಟಿ ಹಾಡುವ ಸೃಷ್ಟಿಗೀತೆ

ಈ ದೇಗುಲ
ಕಲೆಯುಸಿರಾಡುವ ಸ್ತಂಭಗಳು
ನವರಂಗದ ಮೇಲೆಕೆಳಗಿರಿಸಿದ
ಅರಳಿದ ಕಮಲ
ಇದರೊಂದು ರನ್ನ
ದ್ವಾರವ ಸಮೆದನೋ!
ಈ ರಸವಾಹಿನಿಯ
ಸೇತುಗಟ್ಟಿದ ಕಣ್ಣ ಕಂಡರಸಿ
ಚೆಲುವಿನೆಳೆಯೆಳೆಯ
ಗಂಟು ಕಟ್ಟಿದನೋ

ಅಥವಾ ಈ ಕಣ್ಣಿಂದ
ಈ ಕುಸುರಿದ್ವಾರದಿಂದ
ತನ್ನ ಸೃಜನವ ಪ್ರಾರಂಭಿಸಿ

ಒಂದೊಂದಾಗಿ ಅದರ ಸುತ್ತಮುತ್ತ,
ಮೇಲೆ ಕೆಳಗೆ ಸೇರಿಸಿದನೋ
ತನ್ನ ಸೃಷ್ಟಿಗೆ ತಾನೇ
ಹಿಗ್ಗಿ ಮಗುವಿನಂತೆ
ಚಪ್ಪಾಳೆ ತಟ್ಟಿ ಕುಣಿದಾಡಿ ಈ ಹಿಗ್ಗು
ಹೊಳೆಯಲೀಜಾಡಿದನೋ ತಿಳಿಯದು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾಯಕರಿಲ್ಲದ ನಾಯಕ ಜನಾಂಗ
Next post ಲಿಂಗಮ್ಮನ ವಚನಗಳು – ೬೯

ಸಣ್ಣ ಕತೆ

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

cheap jordans|wholesale air max|wholesale jordans|wholesale jewelry|wholesale jerseys